ಶಿರಸಿ: ಇಲ್ಲಿಯ ಸಮಗ್ರ ಅಭಿವೃದ್ಧಿ ವೇದಿಕೆಯ ಪದಾಧಿಕಾರಿಗಳು ಭಾನುವಾರ ಶಿರಸಿ-ಕುಮಟಾ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಕಂಪನಿಯ ಯೋಜನಾ ವ್ಯವಸ್ಥಾಪಕರಿಂದ ಮಾಹಿತಿ ಪಡೆದುಕೊಂಡರು.
ವೇದಿಕೆಯ ಅಧ್ಯಕ್ಷ ಪರಮಾನಂದ ಹೆಗಡೆ, ತಾಂತ್ರಿಕ ಸಲಹೆಗಾರ ವಸಂತ ನಾಯ್ಕ, ಸಂಚಾಲಕರಾದ ರಾಜೇಶ ಶೆಟ್ಟಿ, ಉಪೇಂದ್ರ ಪೈ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಹೆಗಡೆಕಟ್ಟಾ ಕತ್ರಿಯಿಂದ ಹನುಮಂತಿ ಕ್ರಾಸ್ ವರೆಗೆ ಕಾಂಕ್ರಿಟ್ ಹಾಕಿದ್ದು, ಕಾಮಗಾರಿಯನ್ನು ಇನ್ನಷ್ಟು ವೇಗವಾಗಿ ನಡೆಸುವಂತೆ ಆಗ್ರಹಿಸಿದರು.